ಹನಿಗವನಗಳು
ದಿನಕರನಿಗೆ ಲೋಕದ ಚಿಂತೆ
ತಾನು ಅಸ್ತಮಿಸಿದ ನಂತರ ಏನು ಕತೆ..?
ಚಂದ್ರನಿಲ್ಲದ ರಾತ್ರಿಯಲಿ ಜನ ಹೇಗಿರುವರೋ ಕತ್ತಲ ಜೊತೆ..?
ಸೂರ್ಯನ ವ್ಯಥೆ ನೋಡಿದ ಹಣತೆ
ನಿಧಾನವಾಗಿ ಹೇಳಿತ್ತಂತೆ,
"ನಾನುರಿದು ಬೆಳಕ ತರುವೆ ಮತ್ತೆ.."
ತಾನು ಅಸ್ತಮಿಸಿದ ನಂತರ ಏನು ಕತೆ..?
ಚಂದ್ರನಿಲ್ಲದ ರಾತ್ರಿಯಲಿ ಜನ ಹೇಗಿರುವರೋ ಕತ್ತಲ ಜೊತೆ..?
ಸೂರ್ಯನ ವ್ಯಥೆ ನೋಡಿದ ಹಣತೆ
ನಿಧಾನವಾಗಿ ಹೇಳಿತ್ತಂತೆ,
"ನಾನುರಿದು ಬೆಳಕ ತರುವೆ ಮತ್ತೆ.."
(ಎಲ್ಲೋ ಓದಿದ್ದ ಕತೆಯೊಂದರ ಸಾರಾಂಶ..)
***
ತುಳುಕಿದ ಕಣ್ಣೀರಿಗೆ ಕೇಳಿದೆ,
"ಕಣ್ಣಿಂದ ಹೊರಗೇಕೆ ಬಂದೆ..?"
ಕಣ್ಣೀರು ಹೇಳಿತು,
"ನನಗೆ ಜಾಗವೆಲ್ಲಿದೆ..?
ನಿನ್ನ ಇನಿಯನ ನೆನಪು ,ಕನಸು
ಕಣ್ಣ ತುಂಬಿದೆ.
ಅದಕ್ಕೆ ನಾನು ಕೆನ್ನೆಯ ಮೇಲೆ ಹರಿದೆ.."
***ಅದಕ್ಕೆ ನಾನು ಕೆನ್ನೆಯ ಮೇಲೆ ಹರಿದೆ.."
ನಾನು ಕವಯತ್ರಿಯಲ್ಲ
ಭಾವನೆಗಳನ್ನು ಪುಟಕ್ಕಿಳಿಸಲು, ನಿನಗೆ ತಿಳಿಸಲು
ಪದಗಳ ಹುಡುಕಾಟದಲ್ಲಿರುವೆ..!
ಆದರೂ ನಿಜವಾದ ಪ್ರೀತಿಗೆ
ಅಕ್ಷರಗಳ ಅವಶ್ಯಕತೆ ಇಲ್ಲ
ಕಣ್ಣಿನ ಭಾಷೆಯೊಂದೇ ಸಾಕಲ್ಲವೇ..?
ಬಿಸಿಲಿಗೆ ಬಾಯಾರಿ ಬಾಯ್ದೆರೆದ ಭುವಿ ನಾನಾಗಿರಲು
ಬಾನಧಾರೆಯಾಗಿ ನೀ ಬಂದು
ಮಳೆಬಿಲ್ಲ ವರ್ಣಗಳಿಂದ ನನ್ನ ಸಿಂಗರಿಸುವೆಯಲ್ಲವೇ.. ?
***
Neevu padyagalannu kuda channag barithira.. :)
ReplyDeletemodala prayatna..:)
DeleteTumba chennagide kane especially ,,,aa....kannirina kavana...!!!!
ReplyDeleteಯಾವಾಗಲೋ ಕಣ್ಣೀರು ಬಂದಾಗ ಹೊಳೆದ್ದದ್ದು..
Deletenice try :)
ReplyDeletethanks vinay..:)
DeleteKeep it up Suchetha :) all d best!!!
ReplyDeletethank you deepu..:)
Deletesuper
ReplyDeletesuper suchetha
ReplyDeletethank you akka..:)
Deletegood...!
ReplyDeletethanks balaji..:)
Delete